ಕಾನನ

ನಿಸರ್ಗದೆಡೆಗೆ ಪಯಣ

ಧರಣಿ ಈಗ ತರುಣಿ

ಧರೆಯ ಮೇಲೆ ವರುಣ
ಹರಿಸಿದ ತನ್ನ ಕರುಣ
ಈಗ ಹಸಿರುಟ್ಟ ಧರಣಿ
ನವ ತಾರುಣ್ಯದ ತರುಣಿ

ಧರೆಯ ಮೇಲೆ ವರುಣ
ಹರಿಸಿದ ತನ್ನ ಕರುಣ
ಈಗ ಹಸಿರುಟ್ಟ ಧರಣಿ
ನವ ತಾರುಣ್ಯದ ತರುಣಿ

ಭೂಮಿ – ಬಾನಿನ ಬಾಂಧವ್ಯಕೆ
ತಂಪನೀಯುವ ಮಳೆಯೇ ಸಾಕ್ಷಿ
ಮಳೆಹನಿಯಲಿ ಮಿಂದು
ಕಲರವವ ಹೊರಡಿಸಿತು ಪಕ್ಷಿ

ವರ್ಷಾಧಾರೆಯ ಆಗಮನದಿ
ಮೈ – ಮನವು ತಂಪು
ಬಿದ್ದ ಮಳೆಯ ರಭಸಕೆ
ಭೂಮಿ ತುಂಬಾ ಮಣ್ಣಿನ ಕಂಪು

           – – ಜನಾರ್ದನ ಎಂ. ಎನ್. ಗೊರ್ಟೆ.
                           ಭಟ್ಕಳ, ಉತ್ತರ ಕನ್ನಡ ಜಿಲ್ಲೆ


ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.