ವನಬಂಧ-01

ವನಬಂಧ-01

ಎಡದಿಂದ ಬಲಕ್ಕೆ:

  1. 2010ರಲ್ಲಿ ಶುರುವಾದ ಕನ್ನಡದ ವನ್ಯ ವಿಜ್ಞಾನ ಕುರಿತಾದ ಇ-ಮಾಸಪತ್ರಿಕೆ (3)

2. “ಕಾಡಿನ ರೈತ” ಎಂದು ಕರೆಯಲ್ಪಡುವ, ಕೇರಳದ ರಾಜ್ಯ ಪಕ್ಷಿಯಿದು (3)

3. ಡೆಕ್ಕನ್ ಪ್ರಸ್ಥಭೂಮಿಯ ಅಂಚಿನಲ್ಲಿ 1600 ಕಿ. ಮೀ. ವಿಸ್ತರಿಸಿರುವ ಈ ಪರ್ವತಶ್ರೇಣಿಯು ಜಗತ್ತಿನ ಜೀವವೈವಿಧ್ಯ ಪ್ರದೇಶವೆಂದೂ ಗುರುತಿಸಲ್ಪಟ್ಟಿದೆ (5)

4. ಭಾರತದಲ್ಲಿ ಕಾಣಸಿಗುವ ಏಕೈಕ ಗಿಳಿ (Parrot) ಪ್ರಭೇದ (4)

5. ಗರುಡನ ಆಹಾರವಾದ ಸರ್ಪಗಳು, ಮನುಷ್ಯನನ್ನು ಕಚ್ಚಿದಾಗ ಔಷಧಿಯಾಗಿ ಉಪಯೋಗಿಸುವ ‘ಸರ್ಪಗಂಧಿ’ ಸಸ್ಯದ ಇನ್ನೊಂದು ಹೆಸರು (6)

6. ಮಳೆಗಾಲದಲ್ಲಿ ನೆಲದೊಳಗಿಂದ ಹೊರಬರುವ ‘ನಾಯಿಕೊಡೆ’ಯಿದು (3)

7. ಚಿಕ್ಕಮಗಳೂರು ಜಿಲ್ಲೆಯ ಒಂದು ರಾಷ್ಟ್ರೀಯ ಉದ್ಯಾನವನ- ‘ಕಬ್ಬಿಣದ ಅದಿರಿನ ತವರು’ (5)

8. ನೈಸರ್ಗಿಕ ‘ಮಾಲಿನ್ಯ ಸೂಚಕ’ಗಳೆಂದೇ ಕರೆಯುವ ಕಲ್ಲಿನ ಮೇಲೆಲ್ಲಾ ಬೆಳೆಯುವ ಜೀವಿ (4)

9. ಉತ್ತರಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಅಲ್ಲಿನ ಅಂಶಿ ರಾಷ್ಟ್ರೀಯ ಉದ್ಯಾನ ವನದೊಳಗೆ ಹರಿಯುವ ಜೀವನದಿ (4)

10. IUCN ಕೆಂಪು ಪಟ್ಟಿಯಲ್ಲಿರುವ ಇದು ಸಿಂಹವೂ ಅಲ್ಲ, ಕೋತಿಯೂ ಅಲ್ಲ (7)

11. ಇತ್ತೀಚೆಗೆ ನಗರ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಜಪಾನ್ ಮೂಲದ ವೇಗವಾಗಿ ಕಾಡು ಬೆಳೆಸುವ ವಿಧಾನ (4)

12. ನಾವು ಬಾಲ್ಯದಲ್ಲಿ ‘ಆ ಮರ’ದ ಕೊಂಬೆಯಿಂದ ನೇತಾಡುತ್ತಿದ್ದ ಬೇರಿನಲ್ಲಿ ಜೋಕಾಲಿ ಆಡಿದ ನೆನಪು (5)

13. ಕರ್ನಾಟಕದಲ್ಲಿರುವ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ವನದ ಫಲಕ ನಾನು ಬಲದಿಂದ ಎಡಕ್ಕೆ ಓದಿದಾಗ ಹೀಗಾಯ್ತು (5)

14. ವಿಶ್ವ ಪರಿಸರ ದಿನ ಈ ತಿಂಗಳಲ್ಲಿ ಆಚರಿಸಲಾಗುತ್ತದೆ (2)

    ಮೇಲಿನಿಂದ ಕೆಳಕ್ಕೆ:

    1. ಒಂದಾನೊಂದು ಕಾಲದಲ್ಲಿ ಅರಣ್ಯ ಇಲಾಖೆಗೆ ತಲೆನೋವಾಗಿದ್ದ ವೀರಪ್ಪನ್, ಆತನೊಬ್ಬ.! (4)

      7. ಭಾರತದಲ್ಲಿ 1952ರ ನಂತರ ಅವನತಿ ಹೊಂದಿದ ಚೀತಾಗಳನ್ನು ಇತ್ತೀಚೆಗೆ ಆಫ್ರಿಕಾದಿಂದ ತಂದು, ಮರಳಿ ಈ ರಾಷ್ಟ್ರೀಯ ಉದ್ಯಾನವನಕ್ಕೆ ಪರಿಚಯಿಸಲಾಯಿತು (2)
      9. ಇದು ಹಕ್ಕಿಗಳಂತೆ ಒಣ ಎಲೆಗಳಿಂದ ಗೂಡು ನಿರ್ಮಿಸಿ ಮೊಟ್ಟೆ ಇಡುವ ಜಗತ್ತಿನ ಅತ್ಯಂತ ಉದ್ದದ ವಿಷಪೂರಿತ ಹಾವು (5)

      12. ನಾಲ್ಕು ಕಾಲುಗಳಿವೆ ಆನೆ ನಾನಲ್ಲ! ನೀರಲ್ಲಿರುವೆ ಮೀನು ನಾನಲ್ಲ! ದೀರ್ಘಾಯುಷ್ಯದ ವರ ಪಡೆದಿರುವೆ! ನಾನ್ಯಾರು? (2)

      15. ಚಿಕ್ಕ ಹುಡುಗಿ ತಲೆ ಕೆಳಗೆ ಮಾಡಿಕುಳಿತಿರುವ ಕೀಟವೊಂದನ್ನು ಹಿಡಿಯಲು ಕಟ್ಟೆ ಹತ್ತಿದ್ದಾಳೆ! (2)

      16. ಮಲೆನಾಡ ವಿವಿಧ ಮರದ ಮೇಲೆ ಅರಳುವ ಗುಲಾಬಿ ಬಣ್ಣ ಮಿಶ್ರಿತ ಈ ಆರ್ಕಿಡ್ ಹೂವನ್ನು ಶ್ರೀ ರಾಮನ ಸತಿ ಮುಡಿದಿದ್ದಾಳೆ (5)

      17. ಮರವೊಂದನ್ನು ಕುಟ್ಟಿ ಕುಟ್ಟಿ ಹುಳಗಳನ್ನು ತಿನ್ನುತ್ತಿರುವ ಹಕ್ಕಿ (5)

      18. ಕರ್ನಾಟಕದ ಚಿರಾಪುಂಜಿ (3)

      19. ಮಕ್ಕಳಿಲ್ಲದ ಈಕೆ ಸಾಲು ಸಾಲು ಆಲದ ಸಸಿಯನ್ನು ನೆಟ್ಟು ನೂರಾರು ವೃಕ್ಷಗಳಿಗೆ ಮಾತೆ ಎನಿಸಿಕೊಂಡಿದ್ದಾಳೆ (7)

      20. ಮೈಯೆಲ್ಲಾ ಮುಳ್ಳು ಹೊತ್ತು ತಿರುಗುವ ನಿಶಾಚರಿ ಸಸ್ಥನಿಯಿದು (4)

      21. ಪ್ರಪಂಚದಲ್ಲೇ ಅತಿದೊಡ್ಡ ಜಲಚರ ಪ್ರಾಣಿ (4)

      22. ‘ಮಂಕುತಿಮ್ಮನ ಕಗ್ಗ’ ಖ್ಯಾತಿಯ ಡಿ.ವಿ.ಜಿ. ಯವರ ಪುತ್ರ ಬಿ.ಜಿ.ಎಲ್. ಸ್ವಾಮಿಯವರ ಅತ್ಯಂತ ಪ್ರಸಿದ್ಧ ಸಸ್ಯಶಾಸ್ತ್ರ ಕುರಿತಾದ ಪುಸ್ತಕ (5)

      23. ಕನ್ನಡನಾಡು- ನಾವಿರುವ ತಾಣ, ಈ ‘ಮರ’ಗಳ ತವರು ಕಾಣ! (3)

      24. ಆದಿಚುಂಚನಗಿರಿಯಲ್ಲಿರುವ ಪ್ರಸಿದ್ಧಧಾಮ (5)

      25. ಇತ್ತೀಚೆಗೆ ನಿಧನ ಹೊಂದಿದ ಇಸ್ರೋದ ಪ್ರಖ್ಯಾತ ವಿಜ್ಞಾನಿ, ಪಶ್ಚಿಮ ಘಟ್ಟಗಳ ಉಳಿವಿಗಾಗಿ ಪಣತೊಟ್ಟ ಪರಿಸರ ಹೋರಾಟಗಾರ (6)

      “ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 20ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ವಿಳಾಸಕ್ಕಾಗಿ ನೀವೂ ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”

      ಅಕ್ಷತ ಹೆಚ್. ಕೆ.
                ಚಿಕ್ಕಮಗಳೂರು ಜಿಲ್ಲೆ

      Spread the love

      One thought on “ವನಬಂಧ-01

      Comments are closed.

      error: Content is protected.