ನೆರಳೊಂದು ಬೇಕು ಪ್ರತಿಜೀವಿಗೂ
![ನೆರಳೊಂದು ಬೇಕು ಪ್ರತಿಜೀವಿಗೂ](https://kaananamag.in/wp-content/uploads/2023/06/kavana-Page-copy.jpg)
ನೆರಳಿಗೇ ನೆರಳಾಗಬೇಕಿದೆ ಪ್ರತಿ ಮನುಜನೂ…
ಪ್ರಕೃತಿಯ ಒಡಲಲ್ಲಿವೆ
ಲಕ್ಷಾಂತರ ವೃಕ್ಷಗಳು
ಚಿವುಟದಿರಿ, ಉರುಳಿಸದಿರಿ
ಇದೇ ಪರಿಸರ ದಿನದ ಆಶಯಗಳು…
ತನ್ನಂತಾನೇ ಬೆಳೆಸಿದೆ ಪ್ರಕೃತಿ ನೂರಾರು ಗಿಡಮರಗಳನು
ಅವುಗಳನ್ನಾದರೂ ಉಳಿಸಿ ಬೆಳೆಸಬೇಕಿದೆ ನಾವುಗಳು
ಧರೆಯಲ್ಲಿ ನಿಜವಾದ ಸೌಂದರ್ಯವೆಂದಿದ್ದರೆ
ಅದು ಪ್ರಕೃತಿಯಲ್ಲಿ ಮಾತ್ರ.
ಆ ಸೌಂದರ್ಯವೇ ಗಿಡಮರಗಳಾಗಿರುವಾಗ ಅವನ್ನು ಉಳಿಸಲು ಪ್ರಯತ್ನ ನಮ್ಮದಾಗಬೇಕೀಗ…
ಹಸಿರೊಂದೆ ಬೇಕಂತೆ ಭೂತಾಯಿಗೆ…
ಮರಗಳನೆ ಸಾಕಬೇಕಂತೆ ಮುಂದಿನ ಪೀಳಿಗೆಗೆ.
ವನಜಾಕ್ಷಿ ಎಸ್
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಧನ್ಯವಾದಗಳು ಕಾನನ