ಆನಂದಡವಿ
![ಆನಂದಡವಿ](https://kaananamag.in/wp-content/uploads/2022/02/kavana-Page-copy.jpg)
ರವಿ ಶಶಿ ಭೂಮಿಯ ಕಾಂತದಿಂದ
ಅಗ್ನಿ ವಾಯು ವರುಣನ ಕೃಪೆಯಿಂದ
ಸರ್ವ ಭೂತಗಣ ರೂಪದಿಂದ
ಋತುಚಕ್ರ ಸುಯೋಗ ಮಹಾಯೋಗದಿಂದ
ಫಲಪುಷ್ಪ ವೃಕ್ಷ ಕಾಶಿಯಿಂದ
ವೀರ ಪರಾಕ್ರಮ ಶ್ವೇತಮೌನಗಳಿಂದ
ಖಗ ಮೃಗ ಜೀವಜಂತುಗಳಿಂದ
ಬೀಜ ತತ್ತಿ ದೃಷ್ಠಿ ಕೋನ ವ್ಯಾಸಗಳಿಂದ
ದೈತ್ಯ ಉತ್ತಮ ಕನಿಷ್ಠಗಳಿಂದ
ಝರಿ ತೊರೆ ಮೇಘದಾಕೃತಿಗಳಿಂದ
ಗಿರಿ ಶಿಖರ ಕಣಿವೆಗಳಿಂದ
ಬಹುರೂಪ ವಿವಿಧ ಬಗೆ ವಿನ್ಯಾಸಗಳಿಂದ
ಆನಂದಡವಿಯ ಅನಾವರಣ
ಆನಂದಡವಿಯಲಿ…….!
– ಕೃಷ್ಣ ನಾಯಕ್
ರಾಮನಗರ ಜಿಲ್ಲೆ
![](https://kaananamag.in/wp-content/uploads/2021/02/photo6134441019840768938.jpg)
ಹವ್ಯಾಸಿ ಕವಿ, ಪರಿಸರ ಕಾಳಜಿಯ ಜೊತೆಗೆ ವನ್ಯಜೀವಿಗಳ ಬಗ್ಗೆ ಆಸಕ್ತಿ ಹೊಂದಿರುತ್ತೇನೆ. ವೃತ್ತಿಯಲ್ಲಿ ಖಾಸಗಿ ಕಂಪನಿಯ ಉದ್ಯೋಗ. ಪದವಿ – B.Sc