ಇರುಳ ಮಂಥನ
ಇರುಳ ಮಂಥನ
ಇದು ಇರುಳ ಮಂಥನ
ಚಂದ್ರ ನಿಲ್ಲದ ರಾತ್ರಿಯೊಳು
ತಾರೆ ಕಾಣದ ನಗರದೊಳು
ಕತ್ತಲಲ್ಲಿದ ಇರುಳಿನೊಳು
ಇರುಳ ಮಂಥನ
ಇದು ಇರುಳ ಮಂಥನ
ಗದ್ದಲದ ಗೂಡಿನೊಳು
ಪ್ರಗತಿಯ ಪಥದೊಳು
ಋತುವಿಲ್ಲದ ಇರುಳೊಳು
ಇರುಳ ಮಂಥನ
ಇದು ಇರುಳ ಮಂಥನ
ಕಡಲ ತೀರದೊಳು
ಕಾನನದ ಕಣಿವೆಯೊಳು
ಜೀವ ವೈವಿಧ್ಯದೊಳು
ಇರುಳ ಮಂಥನ
ಇದು ಇರುಳ… ಮಂಥನ…!
– ಕೃಷ್ಣನಾಯಕ್
ರಾಮನಗರ ಜಿಲ್ಲೆ
![](https://kaananamag.in/wp-content/uploads/2021/02/photo6134441019840768938.jpg)
ಹವ್ಯಾಸಿ ಕವಿ, ಪರಿಸರ ಕಾಳಜಿಯ ಜೊತೆಗೆ ವನ್ಯಜೀವಿಗಳ ಬಗ್ಗೆ ಆಸಕ್ತಿ ಹೊಂದಿರುತ್ತೇನೆ. ವೃತ್ತಿಯಲ್ಲಿ ಖಾಸಗಿ ಕಂಪನಿಯ ಉದ್ಯೋಗ. ಪದವಿ – B.Sc