ಕವಿರಾಗ

ಕವಿರಾಗ

ಮೂಡಣದಿ ಮೂಡುವನು ನೇಸರನು
ಹೊನ್ನ ನಗೆಯ ಬೀರುತಾ|
ಬಾನ ಏರಿ ಬರುವನು ಜಗದ ತಮವನೀಗುತಾ
ಇರುಳು ಕಳೆದು ಬೆಳಕಿನೊಡನೆ ನವೋಲ್ಲಾಸ ತರುವನು||

ಚುಮು ಚುಮು ಚಳಿಗೆ ಬೆಚ್ಚನೆ ಅಪ್ಪುಗೆ ನೀಡುವನು
ಇಬ್ಬನಿಯ ಕರಗಿಸಿ ಎಳೆ ಬಿಸಿಲ ಇಳೆಗೆ ಇಳಿಸುತಾ|
ಹಕ್ಕಿಗಳ ಕಲರವದಿ ತಾ
ಮಂಜಿನಾ ಮುತ್ತುಗಳ ನಡುವಲ್ಲಿ ಹೊಳೆಯುವನು||

ಸುತ್ತೆಲ್ಲ ನವ ಚೈತನ್ಯ ಹೊಮ್ಮಿಸುವನು
ಬೆಳಕ ನೀಡಿ ಶುಭವ ಕೋರುತಾ|
ಮರಗಳ ನಡುವಲ್ಲಿ ಬೆಳಕಿನ ಕಣ್ಣಾಮುಚ್ಚಾಲೆ ಆಡುತಾ
ಹೂ ಅರಳಿಸಿ ಎಲ್ಲೆಲ್ಲೂ ಕಂಪು ಸೂಸುವನು||

ಧರೆಯನು ಪ್ರೀತಿಯಲಿ ವಶವಾಗಿಸುವನು
ಹಸಿರಿನ ಸಿರಿಯ ಜನನ ಕಾರಣ ತಾ|
ಬರಿದಾದ ಧರಣಿಯಲಿ ಹಸಿರನು ಬೆಳೆಸುತಾ
ತಾಳೆ ಬಾಳೆ ತೆಂಗಿನ ಅಂಗಕೆ ರಂಗ ನೀಡುವನು||

ಪಡುವಣದಿ ದೂರ ಸರಿಯುವನು
ಬಾನ ಮೊಗವ ಕೆಂಪೇರಿಸುತಾ|
ಕಡಲ ಒಡಲಲಿ ಮಲಗುವ ಕತ್ತಲ ತರಿಸುತಾ
ಮತ್ತೆ ಮುಂಜಾವಲಿ ಬೆಳಕ ಚೆಲ್ಲುತ ತನ್ನಯ ಕಾರ್ಯಕೆ ಬರುವನು||

ಪ್ರತಿಭಾ ಪ್ರಶಾಂತ್
ಉತ್ತರ ಕನ್ನಡ ಜಿಲ್ಲೆ       


Print Friendly, PDF & Email
Spread the love
error: Content is protected.