ಅರಿತು ಜಾಗೃತರಾಗೋಣ

ಅರಿತು ಜಾಗೃತರಾಗೋಣ

ಸೀಮೆ ಮೀರುತ್ತಿದೆ ಹೀಗೇಕೆ ಮಾನವನ ದುರಾಸೆ? ,
ಒಂದಲ್ಲ ಒಂದು ದಿನ ಅವನಿಗೆ ಕಾದಿದೆ ನಿರಾಸೆ ,
ಎಲ್ಲವೂ ಅಳೆದು ಬರೀ ಮನುಜರುಳಿದರೆ ಸೊಗಸೆ?
ಎಲ್ಲವೂ ಅಳಿದ ಮೇಲೆ ಮನುಜರುಳಿವುದು ಬರಿ ಕನಸೆ.

ಹೊಗೆ ಮಾಲಿನ್ಯಗಳಿಂದ ಕಮರುತ್ತಿದೆ ಕುಸುಮ
ನೈತಿಕತೆ ಇಲ್ಲದೆ ನಡೆಯುತ್ತಿದೆ ಅಕ್ರಮ
ರಸ್ತೆ ಕಟ್ಟಡಗಳ ನಿರ್ಮಾಣಗಳಿಗೆ ಮರಗಳ ಮಾರಣಹೋಮ
ಪ್ರಕೃತಿ ಮಾತೆ ಒಮ್ಮೆ ಮುನಿದರೆ ಎಲ್ಲವೂ ನೆಲಸಮ.

ಅರಣ್ಯ ನಾಶಕ್ಕೆ ಮನುಜನೆ ಮೂಲಕಾರಣ
ಪ್ಲಾಸ್ಟಿಕ್, ರಾಸಾಯನಿಕಗಳು ಮಣ್ಣಿಗೆ ಮಿಶ್ರಣ
ತಿನ್ನುವ ಅನ್ನವೂ ವಿಷವಾಗುವುದು ಮರೆಯದಿರಣ್ಣ
ಇದನ್ನು ಅರಿತು ಇಂದಾದರೂ ಜಾಗೃತರಾಗೋಣ.

ಬನ್ನಿ ಗೆಳೆಯರೇ ಕಾನನದ ಸೊಬಗ ಸವಿಯುವ,
ಚಿಟ್ಟೆ ಹಕ್ಕಿಗಳ ಬಣ್ಣಗಳಿಗೆ ಬೆರಗಾಗುವ,
ಜೇನುನೊಣಗಳಿಂದ ಒಗ್ಗಟ್ಟು ಕಲಿಯುವ,
ಇರುವೆಗಳಿಂದ ಶಿಸ್ತಿನ ನೀತಿ ಕಲಿಯುವ.

ದೀಪಿಕಾ ಬಾಯಿ ಎನ್
ಬೆಂಗಳೂರು ಜಿಲ್ಲೆ        


Print Friendly, PDF & Email
Spread the love
error: Content is protected.