ಕಾನನ

ನಿಸರ್ಗದೆಡೆಗೆ ಪಯಣ

ದೀಪಿಕಾ ಬಾಯಿ (ದೀಪು)

M.Sc ( ಗಣಿತ ) ಮುಗಿಸಿ, ನನ್ನಿಷ್ಟ ದಂತೆ ಶಿಕ್ಷಣ ವೃತ್ತಿ ಆರಿಸಿಕೊಂಡು, ಸರ್ಕಾರಿ ಶಾಲಾ ಮಕ್ಕಳಿಗೆ ಸೃಜನಾತ್ಮಕ ಕಲಿಕೆಗೆ ಪೂರಕವಾಗಲು ರಾಮಕೃಷ್ಣ ಮಿಷನ್ ಶಿವನಹಳ್ಳಿ ಯವರು ಆಯೋಜಿಸಿರುವ ಪ್ರೊಜೆಕ್ಟ್ ಮಾಡೂ ನಲ್ಲಿ ಕೆಲಸ ಮಾಡುತ್ತಿದ್ದೇನೆ. ವಿವಿಧ ಶಾಲೆಯ ಮಕ್ಕಳೊಂದಿಗೆ ಚಟುವಟಿಕೆಗಳ ಮೂಲಕ ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಚರ್ಚಿಸುವುದು ನನ್ನ ವೃತ್ತಿ ಮತ್ತು ಪ್ರವತ್ತಿ ಕೂಡ ಹೌದು .ಚಿಕ್ಕ ಕಥೆಗಳು ಮತ್ತು ಕವನಗಳು ಬರೆಯುವುದು ,ಚಿತ್ರಕಲೆ ನನ್ನ ಹವ್ಯಾಸ ಗಳು. ಚಿಕ್ಕ ವಯಸ್ಸಿನಿಂದ ಬೆಂಗಳೂರಿನಲ್ಲೆ ಬೆಳೆದ ನನಗೆ ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಹೆಚ್ಜ್ಚಿನ ಜ್ಞಾನ ಇರಲಿಲ್ಲ. ಆದರೆ ಈಗ ಪರಿಸರ ಕಾಳಜಿ ಹೊಂದಿರುವ ಕೆಲವು ಗೆಳೆಯರೊಂದಿಗೆ ಸೇರಿ ನನಗು ಪ್ರಕೃತಿ ಯ ಬಗ್ಗೆ ಹೆಚ್ಚು ತಿಳಿಯುವ ಕುತೂಹಲ ಬಂದಿದೆ. ಪರ್ವತಾರೋಹಣ, ಪಕ್ಷಿ ವೀಕ್ಷಣೆ, ಛಾಯಗ್ರಹಣಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುವುದು ನನಗಿಷ್ಟ .

ಅದೆಷ್ಟು ಎತ್ತರ ನೀ ವಿಸ್ತಾರ ಗಗನಅಚ್ಚರಿಗಳೊಡನೆ ಸೆಳೆಯುವೆ ಎಲ್ಲರ ಗಮನಸೂರ್ಯ, ಚಂದ್ರ ತಾರೆಗಳ ತಾಣನೋಡಲು ಬೆಳೆಸಲೆ ನಿನ್ನತ್ತ ಪಯಣ? ಒಮ್ಮೆ ಕಪ್ಪು, ಒಮ್ಮೆ ಕೆಂಪು, ಒಮ್ಮೊಮ್ಮೆ ಬಿಳಿಸೂರ್ಯ...

ಹಿಮದಿಂದ ಕರಗಿಹರಿದು ಧಾರೆಯಾಗಿಅಲ್ಲಲ್ಲೊಂದು ಹೆಸರಾಗಿಹಸಿರಿಗೆ ಉಸಿರಾಗಿಅಮೃತವಾದ ಜೀವ ಜಲ, ಜುಳು ಜುಳನೆ ಸದ್ದು ಮಾಡಿಸಂಗೀತದ ಅಲೆಯ ಹೂಡಿಬಳುಕುತ್ತಾ ಹರಿವ ಮೋಡಿಎಂಥಾ ಚೆಂದ ನೋಡಿ! ತನ್ನೊಡಲ ಚಾಚಿ ಜಲಚರಗಳ...

ಇಳೆಯಿಂದ ಮೊಳಕೆ ಹೊಡೆದು, ಹೊರಬಂತು ಪೈರುಆಳ ಅಗಲದಿ ನುಗ್ಗಿ ಮಣ್ಣ ಬಂಧಿಸಿತು ಬೇರುಪೈರ ನೋಡಿ ಆಹಾರಕಾಗಿ ಬಂತಲ್ಲ ಕೀಟಕೀಟವನು ಕಂಡ ಹಕ್ಕಿ ಕೇಳಿತು, ನೀನೇ ನನ್ನ ಊಟ!...

ಬಂದೆ ನಾ, ನಿನ್ನ ಬೆನ್ನ ಹತ್ತಿ,ಓಡುತಿರುವೆ ನೀನೆಲ್ಲಿ ಓ ಪಾತರಗಿತ್ತಿ?ನೋಡಿದೆ ನಿನ್ನ ನಾ ತಲೆಯೆತ್ತಿ,ಹೊರಟೆ ನೀನೆಲ್ಲಿ ನಿನ್ನ ಬಣ್ಣವ ನನ್ನ ಕೈಗೆ ಮೆತ್ತಿ. ಮುತ್ತಿನಂತೆ ಪೋಣಿಸಿದೆ ನೀನಿಟ್ಟ...

ಹೂವೇ,ಚೆಂದದಿ ಮುಗುಳ್ನಗೆಯ ಬೀರುತಲಿರುವೆ,ನಿನ್ನಂತೆ ನನಗಿರುವ ಆಸೆ ತಂದಿರುವೆ,ಹರಡುತಿರು ಹೀಗೆ ನಿನ್ನೊಡಲ ಕಂಪು,ನೋಡುಗರ ಕಣ್ಗಳಿಗೆ ಅದುವೇ ತಂಪು. ಹೂವೇ,ಹಕ್ಕಿ, ಕೀಟಗಳಿಗೆ ಮಕರಂದ ನೀ ನೀವೆ,ಗಿಡದ ಸೌಂದರ್ಯಕೆ ನೀನೇ ಒಡವೆ,ನಾನಾ...

ಸೀಮೆ ಮೀರುತ್ತಿದೆ ಹೀಗೇಕೆ ಮಾನವನ ದುರಾಸೆ? ,ಒಂದಲ್ಲ ಒಂದು ದಿನ ಅವನಿಗೆ ಕಾದಿದೆ ನಿರಾಸೆ ,ಎಲ್ಲವೂ ಅಳೆದು ಬರೀ ಮನುಜರುಳಿದರೆ ಸೊಗಸೆ?ಎಲ್ಲವೂ ಅಳಿದ ಮೇಲೆ ಮನುಜರುಳಿವುದು ಬರಿ...

ಬಾಲ್ಯ ಎಷ್ಟು ಚಂದ!. ನೋಡಿದ್ದನ್ನೆಲ್ಲ ಮುಟ್ಟಿ ಅನ್ವೇಷಿಸುವ ಆಸೆ. ಚಿಕ್ಕವರಿದ್ದಾಗ ಬೇಸಿಗೆ ರಜೆ ಬಂದ್ರೆ ಸಾಕು, ಪುಸ್ತಕಗಳಿಗೂ ರಜೆಕೊಟ್ಟು ಸ್ನೇಹಿತರೊಟ್ಟಿಗೆ ಆಟ ಆಡುವುದು, ಸೈಕಲ್ ತುಳಿಯುವುದು, ಅಲ್ಲೊಂದು...

error: Content is protected.