ವಿಸ್ಮಯ – ಜಗತ್ತು

ಸ್ವಚ್ಛತೆ ಸಂರಕ್ಷಣೆ
ಸಮತೋಲನೆಯ ಸಂಕಲ್ಪ ಒಂದೆಡೆ
ಬರಡು ವಿನಾಶ
ಮಾಲಿನ್ಯ ಓಜೋನ್ ಪರಿಣಾಮ ಮತ್ತೊಂದೆಡೆ

ಸೌರ ವಾಯು ಜಲ ಶಕ್ತಿಗಳ ಬಳಕೆ
ಅದಿರು ಸಸ್ಯ ಸಾಗರ ಸಂಪನ್ಮೂಲಗಳ ಬಳಕೆ ಒಂದೆಡೆ
ವಿಶ್ವ ನೆಲಜಲ ವಾಯು ದಿನಗಳ ಆಚರಣೆ
ಮಿಸಲಿಡುವಿಕೆ ಮತ್ತು ಕಾನೂನು ಕಟ್ಟಡಗಳು ಮತ್ತೊಂದೆಡೆ

ಹಸಿವು ಬಡತನ ದಾರಿದ್ರ್ಯ
ನಿರ್ಮೂಲನೆಯ ಕೂಗು ಒಂದೆಡೆ
ಆಹಾರ ಪೋಲಿನಿಂದಲೇ 1/3 ರಷ್ಟು
ಹಸಿರುಮನೆ ಮಾಲಿನ್ಯ ಮತ್ತೊಂದೆಡೆ

ಜಾಗತೀಕರಣ ಆಧುನೀಕರಣ
ಕೈಗಾರಿಕರಣ ನಗರೀಕರಣ ಒಂದೆಡೆ
ಜಾಗತಿಕ ತಾಪಮಾನ ಹವಾಮಾನ ಬದಲಾವಣೆ
ಅಂತರ್ಜಲ ಕುಸಿತ ಮಾಲಿನ್ಯದ ಪರಿಣಾಮ ಮತ್ತೊಂದೆಡೆ

ಆರ್ಥಿಕತೆ ವ್ಯಾಪಾರೀಕರಣ
ಉದ್ಯೋಗಿಕರಣ ನಗರೀಕರಣ ಒಂದೆಡೆ
ಮಾಲಿನ್ಯಕೆ ಅಭಿವೃದ್ಧಿಯ ಮಂತ್ರ
ವಿನಾಶದ ಅಂಚಿಗೆ ಪರಿಹಾರ ಧನ ಮತ್ತೊಂದೆಡೆ

-ಕೃಷ್ಣನಾಯಕ್.
ರಾಮನಗರ ಜಿಲ್ಲೆ

Print Friendly, PDF & Email
Spread the love
error: Content is protected.