ಕಾನನ

ನಿಸರ್ಗದೆಡೆಗೆ ಪಯಣ

ಬೆಳೆಸುವ ಹಸಿರು

ಹಸಿರಿನ ವನಗಳ ಬೆಳೆಸುತ ನಾವು
ಉಸಿರನು ತುಂಬುವ ಜಗದಲ್ಲಿ
ಬಿಸಿಯನು ಸೂಸಿದೆ ಪರಿಸರ ಎಲ್ಲೆಡೆ
ಕುಸಿದಿದೆ ಶುದ್ಧತೆ ನೋಡಿಲ್ಲಿ

ಜಲವನು ವ್ಯಯಿಸದೆ ಮಿತದಲಿ ಬಳಸುವ
ಹೊಲಸನು ತೂರದೆ ನದಿಗಳಿಗೆ
ಮಲಿನವ ಮಾಡದೆ ಶರಧಿಯ ಒಡಲನು
ಒಲವನು ತೋರುವ ಈ ಇಳೆಗೆ

ಕಾನನ ಕಡಿಯದೆ ಗಿಡಗಳ ನೆಡುತಲಿ
ಗಾನವ ಪಾಡುವ ಧರೆಯಲ್ಲಿ
ಜೇನಿನ ಸವಿಯಿದೆ ಹಸಿರನು ಕಾಯ್ದರೆ
ಬೇನೆಯು ಬವಣೆಯು ನಮಗಿಲ್ಲ

ಬೀಸುವ ಗಾಳಿಗೆ ಧೂಮವ ಬೆರಸದೆ
ಸೂಸುವ ಗಂಧವ ಸುತ್ತಲಲಿ
ಮಾಸದೆ ಉಳಿಸುವ ಹಸಿರಿನ ಸಿರಿಯನು
ಹಾಸುತ ಬಂಧುರ ಭಾವದಲಿ

ಶುಭಲಕ್ಷ್ಮಿ ಆರ್. ನಾಯಕ
           ಉಡುಪಿ ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.