ವೃಕ್ಷ ವೈಭವ

ವೃಕ್ಷ ವೈಭವ

ಹಸಿರಿನ ಮಡಿಲಲಿ ಉಸಿರಿಹುದು
ಹಸಿರ ತೋಳಲಿ ಆಶ್ರಯವಿಹುದು
ಹಸಿರಿಂದಲೆ ಜೀವ-ಜಲ ಬೆಳೆವುದು
ಹಸಿರ ಉಳಿಸಲು ಬಾಳು ಹಸನಾಗುವುದು||

ವೃಕ್ಷ ವೈಭವ ಕಣ್ ಸೆಳೆದಿಹುದು
ರೆಂಬೆ ಕೊಂಬೆಗಳ ಸುತ್ತೆಲ್ಲ ಚಾಚಿಹುದು
ಅದೆಷ್ಟು ಜೀವಗಳಿಗೆ ಆಹಾರ ವಿತ್ತಿಹುದು
ಇನ್ನೆಷ್ಟು ಜೀವಿಗಳಿಗೆ ತನ್ನೊಡಲಲಿ ಸಲಹಿಹುದು||

ಅಪಾರ ಉಪಯೋಗದಲಿ ತಾನಿಹುದು
ಗಾಳಿಯನಿತ್ತು ಗಂಧವ ಹರಡಿಹುದು
ಮಳೆ, ಬೆಳೆ ಎಲ್ಲವೂ ನಿನ್ನಿಂದಾಗಿಹುದು
ಪರಿಸರದಾ ಮುಖ್ಯ ಸ್ಥಾನವೆ ಮರಗಿಡಗಳದು||

ಯಾಂತ್ರಿಕತೆಯಲಿ ಕೊಡಲಿ ಪೆಟ್ಟು ಬಿದ್ದಿಹುದು
ಸ್ವಾರ್ಥದಲಿ ಉಪಕಾರಕೆ ಅಪಕಾರವಾಗಿಹುದು
ಕಾಂಕ್ರೀಟ್ ಕಾಡಿನ ಮಧ್ಯೆ ಹಸಿರಿನ ನಾಶವಾಗಿಹುದು
ಬದುಕುಲು ಬಲು ಮುಖ್ಯ ಗಿಡಮರಗಳು ಅರಿತು
ಉಳಿಸಿ ಬೆಳೆಸಬೇಕಿಹುದು||

ಪ್ರತಿಭಾ ಪ್ರಶಾಂತ
                 ಉತ್ತರ ಕನ್ನಡ ಜಿಲ್ಲೆ   


Print Friendly, PDF & Email
Spread the love
error: Content is protected.