ನೀವೂ ಕಾನನಕ್ಕೆ ಬರೆಯಬಹುದು

ನೀವೂ ಕಾನನಕ್ಕೆ ಬರೆಯಬಹುದು

    © ಸುನಿಲ್ ಆರ್

                  ಧರೆಯ ಜೀವದ್ರವವೆಂದರೆ ನೀರು. ಭೂಮಿಯ ಮೇಲ್ಮೈನ ಶೇಕಡಾ ಎಪ್ಪತ್ತೊಂದು ಭಾಗವನ್ನು ಆವರಿಸಿಕೊಂಡಿರುವ ನೀರು, ಭೂಮಿಯನ್ನು ಜೀವಲೋಕವನ್ನಾಗಿ ರೂಪಿಸಿರುವ ಮೂಲ ಅಂಶವಾಗಿದೆ. ಸಸ್ಯಗಳ ದ್ಯುತಿಸಂಶ್ಲೇಷಣೆಯಿಂದ ಹಿಡಿದು ಮೀನುಗಳು, ಆಮೆಗಳು, ಕಪ್ಪೆಗಳು ಹಾಗೂ ಅನೇಕ ಜಲಚರ ಜೀವಿಗಳ ವಾಸಸ್ಥಳದವರೆಗೆ—ಜೀವನದ ಪ್ರತಿಯೊಂದು ಹಂತದಲ್ಲಿಯೂ ನೀರಿನ ಪಾತ್ರ ಅವಿಭಾಜ್ಯವಾಗಿದೆ. ಪರಿಸರದ ಸಮತೋಲನ ಮತ್ತು ಜೀವಿಗಳ ಅಸ್ತಿತ್ವ ನೀರಿನ ಲಭ್ಯತೆ ಹಾಗೂ ಶುದ್ಧತೆಯ ಮೇಲೆ ಅವಲಂಬಿತವಾಗಿದೆ.

ನೀರು ನೈಸರ್ಗಿಕವಾಗಿ ಮರುಚಕ್ರಣಗೊಳ್ಳುತ್ತಿದ್ದರೂ, ಕುಡಿಯುವ ನೀರಿನ ಲಭ್ಯತೆ ದಿನೇದಿನೇ ಕಡಿಮೆಯಾಗುತ್ತಿರುವುದು ಗಂಭೀರ ಎಚ್ಚರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ಸಂರಕ್ಷಣೆ ಮತ್ತು ಅದರ ಮಹತ್ವದ ಕುರಿತು ಜಾಗೃತಿ ಮೂಡಿಸಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು 1992ರಲ್ಲಿ A/RES/47/193 ನಿರ್ಣಯವನ್ನು ಅಂಗೀಕರಿಸಿ, ಪ್ರತಿ ವರ್ಷ ಮಾರ್ಚ್ 22ನ್ನು “ವಿಶ್ವ ನೀರಿನ ದಿನ” ವೆಂದು ಘೋಷಿಸಿದೆ. ಈ ದಿನವು ಕೇವಲ ಆಚರಣೆಯಲ್ಲ, ನಮ್ಮ ನೀರಿನ ಬಳಕೆಯ ಕ್ರಮಗಳನ್ನು ಮರುಪರಿಶೀಲಿಸಿ, ಭವಿಷ್ಯದ ಜೀವಲೋಕಕ್ಕಾಗಿ ಜವಾಬ್ದಾರಿಯುತ ನಡೆಗಳನ್ನು ಅಳವಡಿಸಿಕೊಳ್ಳುವ ಸ್ಮರಣೆ ಕೂಡ ಹೌದು.

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: kaanana.mag@gmail.com
ಅಂಚೆ ವಿಳಾಸ:

ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.

Spread the love

Leave a Reply

Your email address will not be published. Required fields are marked *

error: Content is protected.